ಪ್ರೇಕ್ಷಕರ ಮನ ಮೆಚ್ಚಿಸಲು ‘ಮನ ಮೆಚ್ಚಿದ ಬಂಗಾರು’ ಸಿನಿಮಾ ಬಂಗಾರು ಫಿಲ್ಮ್ ಕಂಬೈನ್ಸ್ ಅಡಿಯಲ್ಲಿ ಬಿಡುಗಡೆ ಆಗುತ್ತಿದೆ. ಬಂಗಾರು ಹನುಮಂತು ಅವರು ನಾಯಕರು ಹಾಗೂ ನಿರ್ಮಾಪಕರು ಸಹ. ಚಿತ್ರಕಥೆ ಹಾಗೂ ನಿರ್ದೇಶನ ಮಾಡಿರುವವರು ಓಂ ಸಾಯಿ ಪ್ರಕಾಶ್.
ವ್ಯಾಪಾರಿ ನೆಲಗಟ್ಟಿನಲ್ಲಿ ಸಂದೇಶವನ್ನು ಸಹ ಇಟ್ಟುಕೊಂಡಿರುವ ಈ ಚಿತ್ರ ಕೆ ಕಲ್ಯಾಣ್ ಅವರ ಸಂಗೀತ, ಆರ್ ಗಿರಿ ಹಾಗೂ ನಾರಾಯಣ ಅವರ ಛಾಯಾಗ್ರಹಣ ಮಾಡಿದ್ದಾರೆ.
ರೋಜಾ ಈ ಚಿತ್ರದ ನಾಯಕಿ, ರವಿಶಂಕರ್, ಶ್ರೀ ನಿವಾಸಮೂರ್ತಿ, ರಮೇಶ್ ಭಟ್, ಸಾಧು ಕೋಕಿಲ, ಶೋಬಾರಾಜ್, ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಫೈವ್ ಸ್ಟಾರ್ ಗಣೇಶ್ ನೃತ್ಯ, ಥ್ರಿಲ್ಲರ್ ಮಂಜು ಸಾಹಸ, ಕೆ ಈಶ್ವರ್ ಸಂಕಲನ ಈ ಚಿತ್ರಕ್ಕೆ ಒದಗಿಸಿದ್ದಾರೆ.